ಅಭಿಪ್ರಾಯ / ಸಲಹೆಗಳು

ಅಕಾಡೆಮಿಯ ಕಾರ್ಯದ ಸ್ವರೂಪ

ಸಾಹಿತ್ಯ ಅಕಾಡೆಮಿಯ ಕೆಲವು ಕಾರ್ಯಕ್ರಮಗಳು ನಿಶ್ಚಿತ ಹಾಗೂ ಆವರ್ತಕ ಸ್ವರೂಪದವುಗಳು. ಕಮ್ಮಟಗಳನ್ನು ಏರ್ಪಡಿಸುವುದು. ವಿಚಾರ ಸಂಕಿರಣಗಳನ್ನು ವ್ಯವಸ್ಥೆಗೊಳಿಸುವುದು. ವಿವಿಧ ಸಂಘ-ಸಂಸ್ಥೆಗಳ ಸಹಯೋಗದ ಕಾರ್ಯಕ್ರಮಗಳಿಗೆ ಧನಸಹಾಯ ಮಾಡುವುದು. ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸೇರಿದ ಪುಸ್ತಕಗಳಿಗೆ ಬಹುಮಾನಗಳನ್ನು ನೀಡುವುದು. ಪ್ರತಿಷ್ಠಿತ ಸಾಹಿತಿಗಳಿಗೆ ಪ್ರಶಸ್ತಿಗಳನ್ನು ನೀಡುವುದು. ತ್ರೈಮಾಸಿಕ ಪತ್ರಿಕೆ ಹಾಗೂ ವಿವಿಧ ವಾರ್ಷಿಕ ಸಂಕಲನ, ಇತರ ಪುಸ್ತಕಗಳನ್ನು ಪ್ರಕಟಿಸುವುದು. ಇದೆಲ್ಲದರ ಜೊತೆಗೆ ಅಕಾಡೆಮಿಯ ಕಾರ್ಯನಿರ್ವಹಣೆಗಾಗಿ ಉಪನಿಬಂಧನೆ (ಬೈಲಾ)ಗಳನ್ನು ರೂಪಿಸಿದ್ದು, ಅಕಾಡೆಮಿಯ ಪ್ರತಿಯೊಂದು ಕಾರ್ಯಕ್ರಮ, ಪ್ರಕಟಣೆ ಮತ್ತಿತರ ಕಾರ್ಯವಿಧಾನಗಳಲ್ಲಿ ಅಕಾಡೆಮಿ ಅನುಸರಿಸಬೇಕಾದ ಆರ್ಥಿಕ ನೀತಿಯನ್ನು ಈ ಬೈಲಾಗಳಲ್ಲಿ ಖಚಿತವಾಗಿ ಉಲ್ಲೇಖಿಸಲಾಗಿದೆÉ. ಇದರಿಂದಾಗಿ ಅಕಾಡೆಮಿಯ ಕಾರ್ಯನಿರ್ವಹಣೆಗೆ ಒಂದು ನಿರ್ದಿಷ್ಟ ಚೌಕಟ್ಟು ದೊರಕಿದೆ.

ಪ್ರವಾಸ ಅನುದಾನ:
ಕನ್ನಡ ಲೇಖಕರು ಕರ್ನಾಟಕದ ಹೊರಗಿನ ಭಾರತದ ಇತರ ಭಾಷಾವಲಯಗಳಿಗೆ ಹೋಗಿ ಅಲ್ಲಿನ ಲೇಖಕರನ್ನು, ಸಾಹಿತ್ಯ ಸಂಸ್ಥೆಗಳನ್ನು ಪರಿಚಯ ಮಾಡಿಕೊಳ್ಳುವ ಸಾಹಿತ್ಯದ ಸಾಂಸ್ಕøತಿಕ ಪ್ರವಾಸವನ್ನು ಕೈಗೊಳ್ಳಲು ಅನುದಾನ ನೀಡುವುದು. ಹೀಗೆ ಪ್ರವಾಸ ಹೋಗಿಬಂದ ಲೇಖಕರು ನೀಡುವ ಸೃಜನಾತ್ಮಕ ಸ್ವರೂಪದ ಬರಹಗಳನ್ನು ಪ್ರವಾಸ ಸಾಹಿತ್ಯ ಮಾಲೆ ಎಂಬ ಹೆಸರಿನಲ್ಲಿ ಪ್ರಕಟಿಸಲಾಗುತ್ತದೆ.

ವಿಚಾರ ಸಂಕಿರಣ:
ಅಕಾಡೆಮಿ ತಾನೆ ನೇರವಾಗಿ ವಿಚಾರ ಸಂಕಿರಣಗಳನ್ನು ಸಂಘಟಿಸುವುದರ ಜೊತೆಗೆ ವಿವಿಧ ಸಾಹಿತ್ಯ ಸಂಘ-ಸಂಸ್ಥೆಗಳ ಸಹಯೋಗದೊಡನೆ ವಿಚಾರ ಸಂಕಿರಣಗಳನ್ನು ನಡೆಸಲು ಆ ಸಂಘ ಸಂಸ್ಥೆಗಳಿಗೆ ಅನುದಾನವನ್ನು ನೀಡುತ್ತದೆ. ಪ್ರತಿ ವರ್ಷ ಹಲವು ಸಂಸ್ಥೆಗಳಿಗೆ ಸಂಕಿರಣ ನಡೆಸಲು ಧನಸಹಾಯ ನೀಡಲಾಗುತ್ತದೆ.

ಕಮ್ಮಟಗಳು:
ಉದಯೋನ್ಮುಖ ಲೇಖಕರಿಗಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವರ್ಷಕ್ಕೆ ಎರಡು ಕಮ್ಮಟಗಳನ್ನು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ. ಪ್ರತಿಯೊಂದು ಕಮ್ಮಟದಲ್ಲಿ ಸುಮಾರು 30 ಜನ ಉದಯೋನ್ಮುಖ ಲೇಖಕರು ಭಾಗವಹಿಸುತ್ತಾರೆ. ಆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ವಿದ್ವಾಂಸರುಗಳಿಂದ ಪ್ರವಚನ, ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ.

ಸಾಹಿತ್ಯ ಕಿರು ಪತ್ರಿಕೆಗಳಿಗೆ ಧನಸಹಾಯ:
ಮೌಲಿಕವಾದ ಕೆಲಸ ಮಾಡುತ್ತಿರುವ ಸಾಹಿತ್ಯ ಕಿರುಪತ್ರಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸಾಹಿತ್ಯ ಕಿರುಪತ್ರಿಕೆಗಳಿಗೆ ಅಕಾಡೆಮಿಯ ಜಾಹೀರಾತಿನ ಮೂಲಕ ಧನಸಹಾಯವನ್ನು ನೀಡಲಾಗುವುದು. ಪ್ರತಿವರ್ಷ ಸುಮಾರು 4-5 ಪತ್ರಿಕೆಗಳಿಗೆ ಧನಸಹಾಯ ನೀಡಲಾಗುತ್ತಿದೆ.

ಯುವಕವಿ ಸಮ್ಮೇಳನ:
30ವರ್ಷ ವಯಸ್ಸಿನ ಒಳಗಿರುವ ಕನ್ನಡ ಕವಿಗಳಿಂದ ತಲಾ 3 ರಂತೆ ಕವಿತೆಗಳನ್ನು ಬರಮಾಡಿಕೊಂಡು, ಹಾಗೆ ಬಂದ ಕವಿತೆಗಳ ಪೈಕಿ ಪರಿಶೀಲನಾ ಸಮಿತಿಯು ಆಯ್ಕೆ ಮಾಡಿದ ಕವಿತೆಗಳನ್ನು ರಚಿಸಿದ ಕವಿಗಳ ಸಮ್ಮೇಳನವನ್ನು “ಯುವಕವಿ ಸಮ್ಮೇಳನ” ಎಂಬ ಹೆಸರಿನಲ್ಲಿ ಪ್ರತಿವರ್ಷ ನಡೆಸಲಾಗುತ್ತದೆ. ಈ ಕವಿಸಮ್ಮೇಳನದಲ್ಲಿ ಮಂಡಿತವಾದ ಕವಿತೆಗಳನ್ನು “ಯುವಕಾವ್ಯ” ಎಂಬ ಹೆಸರಿನ ಸಂಕಲನವಾಗಿ ಅಕಾಡೆಮಿ ಪ್ರಕಟಿಸುತ್ತಿದೆ.

ಪುಸ್ತಕಗಳ ಕೊಡುಗೆ:
ಇತರ ಭಾಷಾವಲಯಗಳಲ್ಲಿರುವ ಕನ್ನಡಿಗರಿಗೆ ಕನ್ನಡ ಸಾಹಿತ್ಯದ ಸಂಬಂಧ ಕಡಿದು ಹೋಗಬಾರದೆಂಬ ಉದ್ದೇಶದಿಂದ ಅಲ್ಲಿನ ಗ್ರಂಥ ಭಂಡಾರವನ್ನು ಬೆಳೆಸುವ ಸಲುವಾಗಿ ಕರ್ನಾಟಕದ ಹೊರಗಿನ ಸಂಘ-ಸಂಸ್ಥೆಗಳಿಗೆ ಅಕಾಡೆಮಿ ಪ್ರಕಟಣೆಗಳ ಜೊತೆಗೆ ಎರಡು ಸಾವಿರ ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಪ್ರಕಟಣೆಗಳು:
ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ಸಣ್ಣಕತೆ, ಕವಿತೆ, ವಿಮರ್ಶೆ, ಪ್ರಬಂಧ, ಮಕ್ಕಳ ಸಾಹಿತ್ಯ, ವಿನೋದ ಸಾಹಿತ್ಯ, ಈ ಲೇಖನಗಳಲ್ಲಿ ಉತ್ತಮವಾದುದನ್ನು ಆಯ್ದು ಪ್ರತಿವರ್ಷ ಪ್ರಕಟಿಸಲಾಗುತ್ತದೆ. ಅಕಾಡೆಮಿಯ ಈ ವಾರ್ಷಿಕ ಸಂಕಲನಗಳ ಜೊತೆಗೆ ಅಕಾಡೆಮಿ ನೇರವಾಗಿ ನಡೆಸಿದ ವಿಚಾರ ಸಂಕಿರಣಗಳ ಪ್ರಬಂಧಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಹೊರತರಲಾಗುತ್ತಿದೆ.

ಅಕಾಡೆಮಿಯ ಕಾರ್ಯಕ್ರಮಗಳನ್ನು ಸಾಹಿತ್ಯಾಸಕ್ತರಿಗೆ ತಿಳಿಯಪಡಿಸಲು ದ್ವೈಮಾಸಿಕ ವಾರ್ತಾಪತ್ರವೊಂದನ್ನು ಅಕಾಡೆಮಿ ಹೊರತರುತ್ತಿದೆ.

ಕನ್ನಡೇತರ ಹಾಗೂ ಜಾಗತಿಕ ಸಾಹಿತ್ಯದ ಪರಿಚಯವನ್ನು ಕನ್ನಡಿಗರಿಗೆ ಅನುವಾದಗಳ ಮೂಲಕ ಮಾಡಿಕೊಡುವ ಉದ್ದೇಶಕ್ಕೆ ಬದ್ಧವಾಗಿ ಕನ್ನಡ ‘ಅನಿಕೇತನ’ ಪತ್ರಿಕೆಯನ್ನು, ಕನ್ನಡೇತರರಿಗೆ ಕನ್ನಡ ಸಾಹಿತ್ಯವನ್ನು ಪರಿಚಯ ಮಾಡಿಕೊಡುವ ದೃಷ್ಟಿಯಿಂದ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‍ಗೆ ಅನುವಾದಿಸಿ ‘ಇಂಗ್ಲಿಷ್ ಅನಿಕೇತನ’ವನ್ನು ಹೊರತರುತ್ತಿದೆ. ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ಅನಿಕೇತನ (ಕನ್ನಡ ಹಾಗೂ ಇಂಗ್ಲಿಷ್) ಸಂಪೂರ್ಣ ಅನುವಾದಕ್ಕೆ ಮೀಸಲಾಗಿರುವುದು ವಿಶೇಷದ ಸಂಗತಿ.

ಸಾಹಿತ್ಯ ಅಕಾಡೆಮಿಯ ಬೆಳ್ಳಿಹಬ್ಬದ ಅಂಗವಾಗಿ ‘ಭಾರತೀಯ ಸಾಹಿತ್ಯ ಸಮೀಕ್ಷೆ’ ಹಾಗೂ ‘ಸಾಹಿತ್ಯ ಪಾರಿಭಾಷಿಕ’ಗಳ ಪ್ರಕಟಣೆಯನ್ನು ಮಾಡಲಾಗಿದೆ. ಹೊಸಗನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿರುವ ಸಾಹಿತಿಗಳ ಜೀವನ ಮತ್ತು ಕೃತಿಗಳನ್ನು ಪರಿಚಯ ಮಾಡಿಕೊಡುವ ‘ಸಾಲು ದೀಪಗಳು’ ಎಂಬ ಗ್ರಂಥವನ್ನು ಪ್ರಕಟಿಸಲಾಗಿದೆ. ಇಷ್ಟರಲ್ಲಿಯೇ ಇದರ ಪರಿಷ್ಕøತ ವಿಸ್ತರಿತ ಆವೃತ್ತಿ ಹೊರಬರುತ್ತಿದೆ.

ಪುಸ್ತಕ ಬಹುಮಾನ:
ಅಕಾಡೆಮಿಯು ಪ್ರತಿವರ್ಷ ಕನ್ನಡದಲ್ಲಿ ಪ್ರಥಮಾವೃತ್ತಿಯಾಗಿ ಪ್ರಕಟವಾಗುವ 18 ಸಾಹಿತ್ಯ ಪ್ರಕಾರಗಳಲ್ಲಿನ ಉತ್ತಮ ಪುಸ್ತಕಗಳಿಗೆ ಬಹುಮಾನವನ್ನು ನೀಡುತ್ತಿದೆ. ಇದಲ್ಲದೆ, ಸೃಜನಶೀಲ ಹಾಗೂ ಸೃಜನೇತರ ವಿಭಾಗದಲ್ಲಿ ಆ ವರ್ಷ ಅತ್ಯುತ್ತಮವೆಂದು ಕಂಡುಬಂದ ಕೃತಿಗಳಿಗೂ ಬಹುಮಾನವನ್ನು ನೀಡುತ್ತಿದೆ. ‘ಅಮೆರಿಕನ್ನಡ’ ಸಂಘಗಳ ಹಾಗೂ ಕನ್ನಡಿಗರ ಕೊಡುಗೆಯಿಂದಾಗಿ ಸಾಹಿತ್ಯ ಅಕಾಡೆಮಿಯು ಕನ್ನಡದಿಂದ ಇಂಗ್ಲಿಷ್‍ಗೆ ಅನುವಾದಿತವಾಗಿರುವ ಸೃಜನಶೀಲ ಕೃತಿಯೊಂದಕ್ಕೆ ಬಹುಮಾನವನ್ನು ನೀಡುತ್ತಿದೆ.

ಗೌರವ ಪ್ರಶಸ್ತಿ:
ಕನ್ನಡ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿರುವ ಕನ್ನಡದ ಐದು ಜನ ಸಾಹಿತಿಗಳಿಗೆ ಪ್ರತಿವರ್ಷ ಗೌರವ ಪ್ರಶಸ್ತಿಯನ್ನು ನೀಡುವ ಮೂಲಕ ಸನ್ಮಾನಿಸಲಾಗುವುದು.

ಅಂತರಜಾಲ ತಾಣ:
ಕನ್ನಡ ಸಾಹಿತ್ಯ ಅಕಾಡೆಮಿಯ ಚಟುವಟಿಕೆಗಳು ಹಾಗೂ ಕನ್ನಡ ಸಾಹಿತ್ಯದ ಇತರ ಮಾಹಿತಿಯನ್ನು ವಿಶ್ವದ ಎಲ್ಲೆಡೆ ಇರುವ ಕನ್ನಡಿಗರಿಗೆ ಒದಗಿಸಲು ಅಕಾಡೆಮಿಯ ಅಂತರಜಾಲ ತಾಣವನ್ನು ರೂಪಿಸಿದೆ.

 

ಸಾಹಿತ್ಯ ಅಕಾಡೆಮಿಯ ಕೆಲವು ಕಾರ್ಯಕ್ರಮಗಳು ನಿಶ್ಚಿತ ಹಾಗೂ ಆವರ್ತಕ ಸ್ವರೂಪದವುಗಳು. ಕಮ್ಮಟಗಳನ್ನು ಏರ್ಪಡಿಸುವುದು. ವಿಚಾರ ಸಂಕಿರಣಗಳನ್ನು ವ್ಯವಸ್ಥೆಗೊಳಿಸುವುದು. ವಿವಿಧ ಸಂಘ-ಸಂಸ್ಥೆಗಳ ಸಹಯೋಗದ ಕಾರ್ಯಕ್ರಮಗಳಿಗೆ ಧನಸಹಾಯ ಮಾಡುವುದು. ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸೇರಿದ ಪುಸ್ತಕಗಳಿಗೆ ಬಹುಮಾನಗಳನ್ನು ನೀಡುವುದು. ಪ್ರತಿಷ್ಠಿತ ಸಾಹಿತಿಗಳಿಗೆ ಪ್ರಶಸ್ತಿಗಳನ್ನು ನೀಡುವುದು. ತ್ರೈಮಾಸಿಕ ಪತ್ರಿಕೆ ಹಾಗೂ ವಿವಿಧ ವಾರ್ಷಿಕ ಸಂಕಲನ, ಇತರ ಪುಸ್ತಕಗಳನ್ನು ಪ್ರಕಟಿಸುವುದು. ಇದೆಲ್ಲದರ ಜೊತೆಗೆ ಅಕಾಡೆಮಿಯ ಕಾರ್ಯನಿರ್ವಹಣೆಗಾಗಿ ಉಪನಿಬಂಧನೆ (ಬೈಲಾ)ಗಳನ್ನು ರೂಪಿಸಿದ್ದು, ಅಕಾಡೆಮಿಯ ಪ್ರತಿಯೊಂದು ಕಾರ್ಯಕ್ರಮ, ಪ್ರಕಟಣೆ ಮತ್ತಿತರ ಕಾರ್ಯವಿಧಾನಗಳಲ್ಲಿ ಅಕಾಡೆಮಿ ಅನುಸರಿಸಬೇಕಾದ ಆರ್ಥಿಕ ನೀತಿಯನ್ನು ಈ ಬೈಲಾಗಳಲ್ಲಿ ಖಚಿತವಾಗಿ ಉಲ್ಲೇಖಿಸಲಾಗಿದೆÉ. ಇದರಿಂದಾಗಿ ಅಕಾಡೆಮಿಯ ಕಾರ್ಯನಿರ್ವಹಣೆಗೆ ಒಂದು ನಿರ್ದಿಷ್ಟ ಚೌಕಟ್ಟು ದೊರಕಿದೆ.

ಪ್ರವಾಸ ಅನುದಾನ:
ಕನ್ನಡ ಲೇಖಕರು ಕರ್ನಾಟಕದ ಹೊರಗಿನ ಭಾರತದ ಇತರ ಭಾಷಾವಲಯಗಳಿಗೆ ಹೋಗಿ ಅಲ್ಲಿನ ಲೇಖಕರನ್ನು, ಸಾಹಿತ್ಯ ಸಂಸ್ಥೆಗಳನ್ನು ಪರಿಚಯ ಮಾಡಿಕೊಳ್ಳುವ ಸಾಹಿತ್ಯದ ಸಾಂಸ್ಕøತಿಕ ಪ್ರವಾಸವನ್ನು ಕೈಗೊಳ್ಳಲು ಅನುದಾನ ನೀಡುವುದು. ಹೀಗೆ ಪ್ರವಾಸ ಹೋಗಿಬಂದ ಲೇಖಕರು ನೀಡುವ ಸೃಜನಾತ್ಮಕ ಸ್ವರೂಪದ ಬರಹಗಳನ್ನು ಪ್ರವಾಸ ಸಾಹಿತ್ಯ ಮಾಲೆ ಎಂಬ ಹೆಸರಿನಲ್ಲಿ ಪ್ರಕಟಿಸಲಾಗುತ್ತದೆ.

ವಿಚಾರ ಸಂಕಿರಣ:
ಅಕಾಡೆಮಿ ತಾನೆ ನೇರವಾಗಿ ವಿಚಾರ ಸಂಕಿರಣಗಳನ್ನು ಸಂಘಟಿಸುವುದರ ಜೊತೆಗೆ ವಿವಿಧ ಸಾಹಿತ್ಯ ಸಂಘ-ಸಂಸ್ಥೆಗಳ ಸಹಯೋಗದೊಡನೆ ವಿಚಾರ ಸಂಕಿರಣಗಳನ್ನು ನಡೆಸಲು ಆ ಸಂಘ ಸಂಸ್ಥೆಗಳಿಗೆ ಅನುದಾನವನ್ನು ನೀಡುತ್ತದೆ. ಪ್ರತಿ ವರ್ಷ ಹಲವು ಸಂಸ್ಥೆಗಳಿಗೆ ಸಂಕಿರಣ ನಡೆಸಲು ಧನಸಹಾಯ ನೀಡಲಾಗುತ್ತದೆ.

ಕಮ್ಮಟಗಳು:
ಉದಯೋನ್ಮುಖ ಲೇಖಕರಿಗಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವರ್ಷಕ್ಕೆ ಎರಡು ಕಮ್ಮಟಗಳನ್ನು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ. ಪ್ರತಿಯೊಂದು ಕಮ್ಮಟದಲ್ಲಿ ಸುಮಾರು 30 ಜನ ಉದಯೋನ್ಮುಖ ಲೇಖಕರು ಭಾಗವಹಿಸುತ್ತಾರೆ. ಆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ವಿದ್ವಾಂಸರುಗಳಿಂದ ಪ್ರವಚನ, ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ.

ಸಾಹಿತ್ಯ ಕಿರು ಪತ್ರಿಕೆಗಳಿಗೆ ಧನಸಹಾಯ:
ಮೌಲಿಕವಾದ ಕೆಲಸ ಮಾಡುತ್ತಿರುವ ಸಾಹಿತ್ಯ ಕಿರುಪತ್ರಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸಾಹಿತ್ಯ ಕಿರುಪತ್ರಿಕೆಗಳಿಗೆ ಅಕಾಡೆಮಿಯ ಜಾಹೀರಾತಿನ ಮೂಲಕ ಧನಸಹಾಯವನ್ನು ನೀಡಲಾಗುವುದು. ಪ್ರತಿವರ್ಷ ಸುಮಾರು 4-5 ಪತ್ರಿಕೆಗಳಿಗೆ ಧನಸಹಾಯ ನೀಡಲಾಗುತ್ತಿದೆ.

ಯುವಕವಿ ಸಮ್ಮೇಳನ:
30ವರ್ಷ ವಯಸ್ಸಿನ ಒಳಗಿರುವ ಕನ್ನಡ ಕವಿಗಳಿಂದ ತಲಾ 3 ರಂತೆ ಕವಿತೆಗಳನ್ನು ಬರಮಾಡಿಕೊಂಡು, ಹಾಗೆ ಬಂದ ಕವಿತೆಗಳ ಪೈಕಿ ಪರಿಶೀಲನಾ ಸಮಿತಿಯು ಆಯ್ಕೆ ಮಾಡಿದ ಕವಿತೆಗಳನ್ನು ರಚಿಸಿದ ಕವಿಗಳ ಸಮ್ಮೇಳನವನ್ನು “ಯುವಕವಿ ಸಮ್ಮೇಳನ” ಎಂಬ ಹೆಸರಿನಲ್ಲಿ ಪ್ರತಿವರ್ಷ ನಡೆಸಲಾಗುತ್ತದೆ. ಈ ಕವಿಸಮ್ಮೇಳನದಲ್ಲಿ ಮಂಡಿತವಾದ ಕವಿತೆಗಳನ್ನು “ಯುವಕಾವ್ಯ” ಎಂಬ ಹೆಸರಿನ ಸಂಕಲನವಾಗಿ ಅಕಾಡೆಮಿ ಪ್ರಕಟಿಸುತ್ತಿದೆ.

ಪುಸ್ತಕಗಳ ಕೊಡುಗೆ:
ಇತರ ಭಾಷಾವಲಯಗಳಲ್ಲಿರುವ ಕನ್ನಡಿಗರಿಗೆ ಕನ್ನಡ ಸಾಹಿತ್ಯದ ಸಂಬಂಧ ಕಡಿದು ಹೋಗಬಾರದೆಂಬ ಉದ್ದೇಶದಿಂದ ಅಲ್ಲಿನ ಗ್ರಂಥ ಭಂಡಾರವನ್ನು ಬೆಳೆಸುವ ಸಲುವಾಗಿ ಕರ್ನಾಟಕದ ಹೊರಗಿನ ಸಂಘ-ಸಂಸ್ಥೆಗಳಿಗೆ ಅಕಾಡೆಮಿ ಪ್ರಕಟಣೆಗಳ ಜೊತೆಗೆ ಎರಡು ಸಾವಿರ ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಪ್ರಕಟಣೆಗಳು:
ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ಸಣ್ಣಕತೆ, ಕವಿತೆ, ವಿಮರ್ಶೆ, ಪ್ರಬಂಧ, ಮಕ್ಕಳ ಸಾಹಿತ್ಯ, ವಿನೋದ ಸಾಹಿತ್ಯ, ಈ ಲೇಖನಗಳಲ್ಲಿ ಉತ್ತಮವಾದುದನ್ನು ಆಯ್ದು ಪ್ರತಿವರ್ಷ ಪ್ರಕಟಿಸಲಾಗುತ್ತದೆ. ಅಕಾಡೆಮಿಯ ಈ ವಾರ್ಷಿಕ ಸಂಕಲನಗಳ ಜೊತೆಗೆ ಅಕಾಡೆಮಿ ನೇರವಾಗಿ ನಡೆಸಿದ ವಿಚಾರ ಸಂಕಿರಣಗಳ ಪ್ರಬಂಧಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಹೊರತರಲಾಗುತ್ತಿದೆ.

ಅಕಾಡೆಮಿಯ ಕಾರ್ಯಕ್ರಮಗಳನ್ನು ಸಾಹಿತ್ಯಾಸಕ್ತರಿಗೆ ತಿಳಿಯಪಡಿಸಲು ದ್ವೈಮಾಸಿಕ ವಾರ್ತಾಪತ್ರವೊಂದನ್ನು ಅಕಾಡೆಮಿ ಹೊರತರುತ್ತಿದೆ.

ಕನ್ನಡೇತರ ಹಾಗೂ ಜಾಗತಿಕ ಸಾಹಿತ್ಯದ ಪರಿಚಯವನ್ನು ಕನ್ನಡಿಗರಿಗೆ ಅನುವಾದಗಳ ಮೂಲಕ ಮಾಡಿಕೊಡುವ ಉದ್ದೇಶಕ್ಕೆ ಬದ್ಧವಾಗಿ ಕನ್ನಡ ‘ಅನಿಕೇತನ’ ಪತ್ರಿಕೆಯನ್ನು, ಕನ್ನಡೇತರರಿಗೆ ಕನ್ನಡ ಸಾಹಿತ್ಯವನ್ನು ಪರಿಚಯ ಮಾಡಿಕೊಡುವ ದೃಷ್ಟಿಯಿಂದ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‍ಗೆ ಅನುವಾದಿಸಿ ‘ಇಂಗ್ಲಿಷ್ ಅನಿಕೇತನ’ವನ್ನು ಹೊರತರುತ್ತಿದೆ. ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ಅನಿಕೇತನ (ಕನ್ನಡ ಹಾಗೂ ಇಂಗ್ಲಿಷ್) ಸಂಪೂರ್ಣ ಅನುವಾದಕ್ಕೆ ಮೀಸಲಾಗಿರುವುದು ವಿಶೇಷದ ಸಂಗತಿ.

ಸಾಹಿತ್ಯ ಅಕಾಡೆಮಿಯ ಬೆಳ್ಳಿಹಬ್ಬದ ಅಂಗವಾಗಿ ‘ಭಾರತೀಯ ಸಾಹಿತ್ಯ ಸಮೀಕ್ಷೆ’ ಹಾಗೂ ‘ಸಾಹಿತ್ಯ ಪಾರಿಭಾಷಿಕ’ಗಳ ಪ್ರಕಟಣೆಯನ್ನು ಮಾಡಲಾಗಿದೆ. ಹೊಸಗನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿರುವ ಸಾಹಿತಿಗಳ ಜೀವನ ಮತ್ತು ಕೃತಿಗಳನ್ನು ಪರಿಚಯ ಮಾಡಿಕೊಡುವ ‘ಸಾಲು ದೀಪಗಳು’ ಎಂಬ ಗ್ರಂಥವನ್ನು ಪ್ರಕಟಿಸಲಾಗಿದೆ. ಇಷ್ಟರಲ್ಲಿಯೇ ಇದರ ಪರಿಷ್ಕøತ ವಿಸ್ತರಿತ ಆವೃತ್ತಿ ಹೊರಬರುತ್ತಿದೆ.

ಪುಸ್ತಕ ಬಹುಮಾನ:
ಅಕಾಡೆಮಿಯು ಪ್ರತಿವರ್ಷ ಕನ್ನಡದಲ್ಲಿ ಪ್ರಥಮಾವೃತ್ತಿಯಾಗಿ ಪ್ರಕಟವಾಗುವ 18 ಸಾಹಿತ್ಯ ಪ್ರಕಾರಗಳಲ್ಲಿನ ಉತ್ತಮ ಪುಸ್ತಕಗಳಿಗೆ ಬಹುಮಾನವನ್ನು ನೀಡುತ್ತಿದೆ. ಇದಲ್ಲದೆ, ಸೃಜನಶೀಲ ಹಾಗೂ ಸೃಜನೇತರ ವಿಭಾಗದಲ್ಲಿ ಆ ವರ್ಷ ಅತ್ಯುತ್ತಮವೆಂದು ಕಂಡುಬಂದ ಕೃತಿಗಳಿಗೂ ಬಹುಮಾನವನ್ನು ನೀಡುತ್ತಿದೆ. ‘ಅಮೆರಿಕನ್ನಡ’ ಸಂಘಗಳ ಹಾಗೂ ಕನ್ನಡಿಗರ ಕೊಡುಗೆಯಿಂದಾಗಿ ಸಾಹಿತ್ಯ ಅಕಾಡೆಮಿಯು ಕನ್ನಡದಿಂದ ಇಂಗ್ಲಿಷ್‍ಗೆ ಅನುವಾದಿತವಾಗಿರುವ ಸೃಜನಶೀಲ ಕೃತಿಯೊಂದಕ್ಕೆ ಬಹುಮಾನವನ್ನು ನೀಡುತ್ತಿದೆ.

ಗೌರವ ಪ್ರಶಸ್ತಿ:
ಕನ್ನಡ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿರುವ ಕನ್ನಡದ ಐದು ಜನ ಸಾಹಿತಿಗಳಿಗೆ ಪ್ರತಿವರ್ಷ ಗೌರವ ಪ್ರಶಸ್ತಿಯನ್ನು ನೀಡುವ ಮೂಲಕ ಸನ್ಮಾನಿಸಲಾಗುವುದು.

ಅಂತರಜಾಲ ತಾಣ:
ಕನ್ನಡ ಸಾಹಿತ್ಯ ಅಕಾಡೆಮಿಯ ಚಟುವಟಿಕೆಗಳು ಹಾಗೂ ಕನ್ನಡ ಸಾಹಿತ್ಯದ ಇತರ ಮಾಹಿತಿಯನ್ನು ವಿಶ್ವದ ಎಲ್ಲೆಡೆ ಇರುವ ಕನ್ನಡಿಗರಿಗೆ ಒದಗಿಸಲು ಅಕಾಡೆಮಿಯ ಅಂತರಜಾಲ ತಾಣವನ್ನು ರೂಪಿಸಿದೆ.

ಇತ್ತೀಚಿನ ನವೀಕರಣ​ : 19-09-2020 03:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080